ಸೃಷ್ಟಿಯೊಂದು ಲಯಿಸಿ, ಬಾಲಕೃಷ್ಣನು ಆಲದೆಲೆಯಲಿ ಮಲಗಿರಲು,

ದೇವಾನುದೇವತೆಗಳು ಕೈಮುಗಿದು, ಸೃಷ್ಟಿ-ಸ್ಥಿತಿ-ಲಯ ಹೀಗೇಕೆನಲು,

ಮಗುಮೊಗದಿ ನಗುತ, ಸಾಗರದ ಕ್ಷೀರವನು ಅವರಿಗೆರಚಿರಲು,

ಕಣ್ತಿಕ್ಕಿ ಮತ್ತೆ ನೋಡಲು, ಹೊಸ ಸೃಷ್ಟಿಯದು ಸಾಗಿತ್ತು!!